RYTHARA SEVA SAHAKARA SANGHA NIYAMITHA
Singanayakanahalli
Testimonials
 
Home >> About Us >> President
President
ಹೆಸರು : ಶ್ರೀಮತಿ. ವಾಣಿಶ್ರೀವಿಶ್ವನಾಥ್   
ವಿಳಾಸ : ಸಿಂಗನಾಯಕನಹಳ್ಳಿ,ಬೆಂಗಳೂರು ಉತ್ತರ ತಾಲ್ಲೂಕು,
    ಬೆಂಗಳೂರು ನಗರ ಜಿಲ್ಲೆ,ದೂರವಾಣಿ – 080 28468272
    ಮೊಬೈಲ್ – 98803 97999
ಗಂಡನ ಹೆಸರು : ಶ್ರೀ. ಎಸ್.ಆರ್. ವಿಶ್ವನಾಥ್,
    ವಿಧಾನ ಸಭಾ ಸದಸ್ಯರು, ಯಲಹಂಕ ಕ್ಷೇತ್ರ.
ವಿದ್ಯಾರ್ಹತೆ : (ಡಿಪ್ಲೋಮಾ – ವಾಣಿಜ್ಯ ಪದ್ಧತಿಗಳು)
 
ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.
ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ 3 ಬಾರಿ ಆಯ್ಕೆಯಾಗಿರುತ್ತಾರೆ.
2005-06 ನೇ ಸಾಲಿನಿಂದ ಸಂಘದ ಪ್ರಥಮ ಮಹಿಳಾ ಅಧ್ಯಕ್ಷಿಣಿಯಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
2010-15 ನೇ ಸಾಲಿಗೆ ಪುನರ್ ಆಯ್ಕೆಯಾಗಿ ಅಧ್ಯಕ್ಷಿಣಿಯಾಗಿ ಮುಂದುವರೆಯುತ್ತಿದ್ದಾರೆ.
ಇವರ ಸೇವಾ ಅವಧಿಯಲ್ಲಿ ಸಂಘವು ಸರ್ವತೋಮುಖ ಅಭಿವೃದ್ಧಿಯನ್ನು ಕಂಡು ಸಂಘವು ಉತ್ತಮ ಸಹಕಾರ ಸಂಘ ಎಂದು ರೂಪುಗೊಂಡಿದೆ.
ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ನಂತರ 500 ಕ್ಕೂ ಹೆಚ್ಚು ಸ್ತ್ರೀ ಶಕ್ತಿಗುಂಪುಗಳನ್ನು ಸ್ಥಾಪಿಸಿ ಪ್ರತಿ ಗುಂಪುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ತರಬೇತಿ ಹಾಗೂ ಸಾಲದ ನೆರವು ಗುಂಪಿಗೆ ರೂ. 5,00,000-00 ವರೆವಿಗೂ ಕೊಡಿಸಿರುತ್ತಾರೆ.
ಸಹಕಾರ ಸಂಘದ 800 ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸರ್ಕಾರದ ವಿವಿಧ ಸಂಸ್ಥೆಗಳ ಸಹಾಯಧನದೊಂದಿಗೆ ಆರ್ಥಿಕ ನೆರವನ್ನು ವಿಸ್ತರಿಸಿರುತ್ತಾರೆ. ಇವರ ಸೇವಾ ಅವಧಿಯಲ್ಲಿ ಸಂಘದ ಹೈಟೆಕ್ ಕಟ್ಟಡ ನಿರ್ಮಾಣಗೊಂಡಿದ್ದು ಇದೊಂದು ಸಾಧನೆಯ ಮೈಲುಗಲ್ಲು ಆಗಿರುತ್ತದೆ.
ಸಂಘದ ಎಲ್ಲಾ ಶಾಖೆಗಳನ್ನು ಕಂಪ್ಯೂಟರೀಕರಣಗೊಳಿಸಿರುತ್ತಾರೆ.
ಇವರ ಅವಧಿಯಲ್ಲಿ ಸಂಘದ ಸದಸ್ಯರಿಗೆ ಯಶಸ್ವಿನಿ ಯೋಜನೆಯ ಕಂತನ್ನು ಸಂಘದಿಂದಲೇ ಭರಿಸಿಕೊಟ್ಟಿರುತ್ತಾರೆ.
ಸಂಘದ ವತಿಯಿಂದ ಅನೇಕ ತರಬೇತಿ ಕಾರ್ಯಕ್ರಮಗಳು, ಆರೋಗ್ಯ ತಪಾಸಣೆ ಪಶುಚಿಕಿತ್ಸಾ ಶಿಬಿರಗಳನ್ನು ನಡೆಸಿಕೊಟ್ಟಿರುತ್ತಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ಸುಮಾರು 600 ಕ್ಕೂ ಹೆಚ್ಚು ಮಹಿಳೆಯರಿಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಧನದೊಂದಿಗೆ ಆರ್ಥಿಕ ನೆರವನ್ನು 2 ಕೋಟಿಗೂ ಹೆಚ್ಚು ಒದಗಿಸಿಕೊಟ್ಟಿರುತ್ತಾರೆ.
15 ಜನ ಪರಿಶಿಷ್ಟ ಜಾತಿ ಸದಸ್ಯರಿಗೆ ತೋಟಗಾರಿಕೆ ಇಲಾಖೆಯ ಸಹಾಯಧನದೊಂದಿಗೆ ಹಣ್ಣು ತರಕಾರಿ ಮಾರಾಟ ಮಾಡಲು ನೂಕುಬಂಡಿ ಒದಗಿಸಿ ಕೊಟ್ಟಿರುತ್ತಾರೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತಾರೆ. ಇವರ ಅವಧಿಯಲ್ಲಿ ಸರ್ಕಾರದ ಎಲ್ಲಾ ಕಾರ್ಯಯೋಜನೆಗಳನ್ನು ಜನ ಸಮೂಹಕ್ಕೆ ಪರಿಚಯಿಸಿ ದೀನ-ದಲಿತರು, ಹಿಂದುಳಿದ ವರ್ಗಗಳಿಗೆ ವಿಶೇಷ ಸಹಾಯಧನದ ನೆರವನ್ನು ಒದಗಿಸಿಕೊಟ್ಟಿರುತ್ತಾರೆ.
ಸಿಂಗನಾಯಕನಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರಿಗೆ ಸ್ವಾವಲಂಭಿ ಜೀವನ ನಡೆಸಲು ಹೊಲಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಿ, ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಒದಗಿಸಿಕೊಟ್ಟಿರುತ್ತಾರೆ.
ಸಂಘದ ಸದಸ್ಯರ ಮಕ್ಕಳಿಗೆ ಹಾಗೂ ಮಹಿಳಾ ಸದಸ್ಯರಿಗೆ ಸಂಘದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಒದಗಿಸಿಕೊಟ್ಟಿರುತ್ತಾರೆ.
14.11.2011ರ ಸಹಕಾರ ಸಪ್ತಾಹ ದಿನದಂದು ಇವರಿಗೆ ರಾಜ್ಯದ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರವರು "ಸಹಕಾರ ರತ್ನ" ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. 2011ರ ಸಾಲಿನ ಸಹಕಾರ ರತ್ನ - ಕರ್ನಾಟಕ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿರುತ್ತದೆ.
ಶ್ರೀಮತಿ. ವಾಣಿಶ್ರೀ ವಿಶ್ವನಾಥ್ ಇವರು ಸಂಘದ ಅಧ್ಯಕ್ಷರಾದ ನಂತರ ಪ್ರಗತಿಯ ಪಕ್ಷಿನೋಟ
ವಿವರಗಳು 31-03-2005 ರಲ್ಲಿ(ಲಕ್ಷಗಳಲ್ಲಿ) 31-03-2013 ರಲ್ಲಿ(ಲಕ್ಷಗಳಲ್ಲಿ)
ಷೇರು ಬಂಡವಾಳ 63.55 236.29
ಸದಸ್ಯರಿಂದ ಠೇವಣಿಗಳು 1489.98 9169.22
ನಿಧಿಗಳು 35.21 1103.79
ಸದಸ್ಯರ ಸಾಲ ಬಾಕಿ 628.07 5967.52
ವ್ಯಾಪಾರ ವಹಿವಾಟು 328.92 548.15
ಭದ್ರತಾ ಹೂಡಿಕೆಗಳು 862.55 4514.08
ನಿವ್ವಳ ಲಾಭ 27.53 282.9
ದುಡಿಯುವ ಬಂಡವಾಳ 1636.27 11376.00
ವಸೂಲಾತಿ 75.45% 86%
ಸದಸ್ಯತ್ವ 3965 5890
ಸ್ತ್ರೀಶಕ್ತಿ ಸಂಘಗಳು 90 693
ಆಡಿಟ್ ವರ್ಗೀಕರಣ ‘ಬಿ’ ‘ಎ’
ಸಾಲ ವಿತರಣೆ    
ಕೃಷಿ ಸಾಲಗಳು 105.36 362.72
ಮಧ್ಯಮಾವಧಿ ಕೃಷಿಸಾಲಗಳು 57.92 161.79
ಕೃಷಿಯೇತ್ತರ ಸಾಲಗಳು 335.64 5714
ಸ್ತ್ರೀಶಕ್ತಿ ಗುಂಪುಗಳಿಗೆ ಸಾಲಗಳು 22.72 632.7
     
 
 
 
 
 
 
Copyright©2013 Privacy Policy Disclaimer Sitemap